Tuesday, November 16, 2010

TULU DRAMA

ತುಳು ನಾಟಕ

ಮುರಳೀಧರ ಉಪಾಧ್ಯ ಹಿರಿಯಡಕ

ತುಳುನಾಡಿನಲ್ಲಿ ಯಕ್ಷಗಾನ ಶತಮಾನಗಳಿಂದ ಜನಪ್ರಿಯ ರಂಗಕಲಾಮಾಧ್ಯ,ಮವಾಗಿ ಬೆಳೆದಿದೆ. ಸುಮಾರು ಐದುದಶಕಗಳಿಂದ ತುಳುನಾಟಕ ಜನಪ್ರಿಯವಾಗಿದೆ. ಮಾಧವ ತಿಂಗಳಾಯರ (1913-1934) 'ಜನಮಲರ್್' (1933) ತುಳುವಿನ ಪ್ರಥಮ ಪ್ರಕಟಿತ ನಾಟಕ. ಪ್ಲೇಗು, ಮಾರಿರೋಗಗಳು ಹಾಗೂ ಮೂಢನಂಬಿಕೆಗಳಿಂದ ತುಂಬಿದ್ದ ಇಪ್ಪತ್ತನೆಯ ಶತಮಾನದ ಆರಂಭದ ದಶಕಗಳ ತುಳು ಸಮಾಜವನ್ನು ತಿಂಗಳಾಯರು ಈ ನಾಟಕದಲ್ಲಿ ಚಿತ್ರಿಸಿದ್ದಾರೆ. ಕೆಮ್ತೂರು ದೊಡ್ಡಣ್ಣ ಶೆಟ್ಟರು ಹಾಗೂ ಕೆ. ಎನ್. ಟೈಲರ್ ತುಳು ನಾಟಕಗಳನ್ನು ಜನಪ್ರಿಯಗೊಳಿಸಿದರು. ನಾಟಕ ಕಂಪೆನಿಯೊಂದನ್ನು ನಡೆಸುತ್ತಿದ್ದ ದೊಡ್ಡಣ್ಣ ಶೆಟ್ಟರ ಹಲವು ನಾಟಕಗಳಲ್ಲಿ 'ಮುತ್ತನ ಮದ್ಮೆ', ಕಲ್ದಿನಕ್ಲೆ ಕಲ್ಪ', 'ಬೊಂಬಾಯಿದ ಕಂಡನೆ' - ನಾಟಕಗಳು ಜನಪ್ರಿಯವಾಗಿದ್ದವು. 'ಮುತ್ತನ ಮದ್ಮೆ' ಸಾವಿರಾರು ಪ್ರದರ್ಶನಗಳನ್ನು ಕಂಡಿತ್ತು. ದೊಡ್ಡಣ್ಣ ಶೆಟ್ಟರ ನಾಟಕಗಳ ಹಾಡುಗಳು ಜನರ ನಾಲಿಗೆಯಲ್ಲಿ ನಲಿದಾಡುತ್ತಿದ್ದವು.

ಜನಪ್ರಿಯ ಸಿನಿಮಾಗಳ ಅನುಕರಣೆ, ಸರಳೀಕೃತ ಪಾತ್ರಗಳು, ಲೈಂಗಿಕ ಶ್ಲೇಷೆಯ ಸಂಭಾಷಣೆಗಳು, ಡಜನ್ಗಟ್ಟಲೆ ಹಾಡುಕುಣಿತಗಳು, ಅತಿರೇಕದ ಹಾಸ್ಯ - ಇವು ಜನಪ್ರಿಯ ತುಳು ನಾಟಕಗಳ ಸಾಮಾನ್ಯ ಲಕ್ಷಣಗಳು. ನೂರಾರು ಪ್ರದರ್ಶನಗಳನ್ನು ಕಾಣುವ 'ಒರಿಯಡ್ದೊರಿ ಅಸಲ್'ನಂಥ ತುಳುನಾಟಕಗಳು ನಗರದ ಕೆಳಮಧ್ಯಮ ವರ್ಗದ ನೋವು ನಲಿವುಗಳನ್ನು ಚಿತ್ರಿಸುವ ಪ್ರಹಸನಗಳು. ಆನಪ್ರಿಯ ತುಳು ನಾಟಕಗಳು ಅಗ್ಗದ ಮನರಂಜನೆ ನೀಡುವ ಕೃತಿಗಳೆಂದು ಅವುಗಳನ್ನು ವಿಮಶರ್ಿಸದೆ ದೂರಸರಿಸುವುದು ಸರಿಯಲ್ಲ. ಈ ನಾಟಕಗಳು ಯಾಕೆ ಜನಪ್ರಿಯ ಎಂದು ಗಂಭೀರವಾಗಿ ಅಧ್ಯಯನ ಮಾಡಬೇಕಾಗಿದೆ. ವಿಮಶರ್ೆಯ ಆಧುನಿಕೋತ್ತರವಾದ ಗಂಭೀರ ಮತ್ತು ಜನಪ್ರಿಯ ಎಂಬ ವಗರ್ೀಕರಣವನ್ನೇ ನಿರಾಕರಿಸುತ್ತದೆ.

ಎಂ. ಎಸ್. ಇಬ್ರಾಹಿಂ, ಮಚ್ಛೇಂದ್ರನಾಥ್ ಪಾಂಡೇಶ್ವರ, ಪಿ. ಎಸ್. ರಾವ್ ಇವರು ನೂರಾರು ನಾಟಕಗಳನ್ನು ಬರೆದಿದ್ದಾರೆ. ಪ್ರದರ್ಶನಗೊಂಡ ಹೆಚ್ಚಿನ ಜನಪ್ರಿಯ ನಾಟಕಗಳು ಮುದ್ರಣಗೊಳ್ಳುವುದಿಲ್ಲ. ಆದರೆ ಪಿ. ಎಸ್. ರಾವ್ ಅವರ ಮೂವತ್ತಾರು ನಾಟಕಗಳು ಪ್ರಕಟಗೊಂಡಿವೆ. ಎಮ್. ಬಿ. ಸಾಲ್ಯಾನ್, ಕೆ. ಕೆ. ಗಟ್ಟಿ, ಗಂಗಾಧರ ಕಿದಿಯೂರು10, ಡಾ| ಸಂಜೀವ ದಂಡಕೇರಿ, ರಾಮ ಕಿರೋಡಿಯಾನ್ ಮತ್ತಿತರ ನೂರಾರು ನಾಟಕಕಾರರು ಜನಪ್ರಿಯ ನಾಟಕಗಳನ್ನು ಬರೆದಿದ್ದಾರೆ.

ಅಮೃತ ಸೋಮೇಶ್ವರ, ಡಿ. ಕೆ. ಚೌಟ, ಕೈಥರೀನ್ ರಾಡ್ರಗಸ್ ಹಾಗೂ ಮನು ಇಡ್ಯ ಜನಪ್ರಿಯತೆಯ ಹುಚ್ಚು ಹೊಳೆಯ ವಿರುದ್ಧ ಈಜಿದ ಮುಖ್ಯ ನಾಟಕಕಾರರು ಅಮೃತ ಸೋಮೇಶ್ವರ ಅವರು 'ಗೋಂದೊಳು' (1980), 'ರಾಯರಾವುತೆ' (1982), 'ಪುತ್ತೂರು ಪುತ್ತೊಳಿ' (1984) ಮತ್ತಿತರ ಹಲವು ನಾಟಕಗಳನ್ನು ಬರೆದಿದ್ದಾರೆ. ಬದುಕಿದ್ದಾಗ ಶೋಷಿಸಿ ಸತ್ತನಂತರ ಪೂಜಿಸಿ ಸಾಮಾಜಿಕ ಕ್ರೌರ್ಯ 'ಗೋಂದೊಳು' ನಾಟಕದ ವಸ್ತು. 'ರಾಯರಾವುತೆ' (1982) ಕನ್ನಡ ಜನಪದ ಕಾವ್ಯಗಳ ಕುಮಾರ ರಾಮನಂತಿದ್ದಾನೆ. 'ಪುತ್ತೂರ್ದ ಪುತ್ತೊಳಿ' (1984) ಬೈಲ್ಜಿಯನ್ ಕವಿ ಮಾರಿಸ್ ಮೆಟರ್ಲಿಂಕನ್ನ 'ಮೊನ್ನವನ್ನ'ದ ರೂಪಾಂತರ. ತುಳು ಜನಪದ ಸಾಹಿತ್ಯದ 'ಪಾಡ್ದನ'ವೊಂದರ ಆಧಾರದಿಂದ ಬರೆದಿರುವ ನಾಟಕ - 'ತುಳುನಾಡ ಕಲ್ಕುಡೆ' (1989). ಈ ನಾಟಕ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಪ್ರಶ್ನಿಸುತ್ತದೆ, ಪ್ರತಿಭಟಿಸುತ್ತದೆ. ಅಮೃತರ ನಾಟಕಗಳಲ್ಲಿ ತುಳುನಾಡಿನ ಪ್ರಾದೇಶಿಕ ರಂಗು, ತುಳುಭಾಷೆಯ ಅಂತಃಸತ್ವ ತುಂಬಿದೆ.

'ಪಿಲಿಪತ್ತಿ ಗಡಸ್' (1997) ನಾಟಕದ ಡಿ. ಕೆ. ಚಔಟ (ಕಾವ್ಯನಾಮ - ಆನಂದಕೃಷ್ಣ) ತನ್ನ ಮೊದಲ ನಾಟಕದಿಂದ ನಿದರ್ೇಶಕರ, ವಿಮರ್ಶಕರ ಗಮನ ಸೆಳೆದಿದ್ದಾರೆ. ತುಳುನಾಡಿನ ಅವಿಭಕ್ತ ಕುಟುಂಬದ 'ಗುತ್ತಿನ ಮನೆ'ಯೊಂದು ಅದರ ಯಜಮಾನನ ಕಾಮುಕತೆಯಿಂದಾಗಿ ಅವನತಿಯತ್ತ ಸಾಗುವುದು ಈ ನಾಟಕದ ವಸ್ತು. ಘಟನೆಗಳನ್ನು ಒಂದೇ ದಿನ ನಡೆದಂತೆ ಸಂಯೋಜಿಸಿರುವುದರಲ್ಲಿ ನಾಟಕಕಾರರ ಕೌಶಲ ಕಾಣಿಸುತ್ತದೆ. ಕ್ಯಾಥರೀನ್ ರಾಡ್ರಿಗಸ್ ಅವರ 'ಸಿರಿತುಪ್ಪೆ' (1995)ಯಲ್ಲಿ ಹತ್ತು ರೇಡಿಯೋ ನಾಟಕಗಳಿವೆ. ತುಳು ಪಾಡ್ದನಗಳ ಆಧಾರದಿಂದ ಬರೆದ ಈ ಸಂಕಲನದ ಕೆಲವು ನಾಟಕಗಳು 'ಕಾಲಕ್ಕೆ ತಕ್ಕ ಕೋಲ' ಎಂಬ ತುಳು ಗಾದೆಯನ್ನು ನೆನಪಿಸುತ್ತವೆ. ಪಾಡ್ದನದ ವಸ್ತುಗಳಿಗೆ ಕಾಲಕ್ಕೆ ತಕ್ಕ ಹೊಸ ರೂಪ ಕೊಡುವುದರಲ್ಲಿ ಕ್ಯಾಥರೀನ್ ರಾಡ್ರಿಗಸ್ ಯಶಸ್ವಿಯಾಗಿದ್ದಾರೆ. ಜಾತಿ. ಧರ್ಮದ ಬೇಲಿಯನ್ನು ದಾಟುವ ಬಗ್ಗೆ ಚಿಂತಿಸುವ ಹೆಂಗಸರು 'ಬೇಲಿ' ನಾಟಕದಲ್ಲಿದ್ದಾರೆ. ಮನು ಇದ್ಯರ 'ತ್ರಿಶಂಕು' (1992) ನಾಟಕದ ನಾಯಕ - ಗುರ್ಕಾರ - ಕೇಡಿನ ಸಾಕಾರರೂಪದಂತಿದ್ದಾರೆ. ದುಷ್ಟತನದ ವಿರುದ್ಧದ ಜನಸಾಮಾನ್ಯರ ಹೋರಾಟವನ್ನು ಈ ನಾಟಕ ಚಿತ್ರಿಸುತ್ತದೆ. ಕುದ್ಕಾಡಿ ವಿಶ್ವನಾಥ ರೈ ಅವರ 'ಸಂಕ್ರಾನ್ತಿ' (1981) ಧನಿ - ಒಕ್ಕಲು ಸಂಬಂಧದ ಒಳ ಸುಳಿಗಳನ್ನು ಚಿತ್ರಿಸುತ್ತದೆ.

ಮಂದಾರ ಕೇಶವ ಭಟ್ಟರು ಭಾಸನ 'ಸ್ವಪ್ನವಾಸವದತ್ತ' ನಾಟಕವನ್ನು 'ಕನತ್ತಪೊಣ್ಣು' ಎಂದು ಭಾಷಾಂತರಿಸಿದ್ದಾರೆ. ಕೆದಂಬಾಡಿ ಜತ್ತಪ್ಪ ರೈ ಅವರು ಕುವೆಂಪು ಅವರ 'ಯಮನ ಸೋಲು', ರವೀದ್ರನಾಥ ಠಾಗೋರ್ ಅವರ 'ಕಾಬೂಲಿವಾಲಾ' ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕೆದಂಬಾಡಿಯವರ 'ಸೂದ್ರೆ ಏಕಲವ್ಯೆ' - ಕುವೆಂಪು ಅವರ 'ಬೆರಳ್ಗೆ ಕೊರಳ್', ಗೋವಿಂದ ಪೈಗಳ 'ಹೆಬ್ಬೆರಳು' ಈ ಎರಡೂ ಕನ್ನಡ ನಾಟಕಗಳಿಗೆ ಋಣಿಯಾಗಿದೆ. ಅಮೃತ ಸೋಮೇಶ್ವರ ಅವರ 'ಜೋಕುಮಾರ ಸ್ವಾಮಿ' (ಕನ್ನಡ ಮೂಲ - ಚಂದ್ರಶೇಖರ ಕಂಬಾರ), ಪ್ರೇಮಾನಂದ ಕಿಶೋರ್ ಅವರ - 'ಯಯಾತಿ' (ಕನ್ನಡ ಮೂಲ - ಗಿರೀಶ್ ಕಾರ್ನಡ್), ಎಚ್ಕೆ ಕಕರ್ೇರಾ ಅವರ 'ಪುರುಷೆ' (1998, ಮೂಲ ಮರಾಠಿ - ಜಯವಂತ ದಳ್ವಿ) ಇವು ಅಧ್ಯಯನ ಯೋಗ್ಯ ಭಾಷಾಂತರ ನಾಟಕಗಳು.
 

No comments:

Post a Comment