Tuesday, November 16, 2010

TULU YAKSHAGANA

ತುಳು ಯಕ್ಷಗಾನ

ಮುರಳೀಧರ ಉಪಾಧ್ಯ ಹಿರಿಯಡಕ

ಬಾಯಾರು ಸಂಕಯ್ಯ ಭಾಗವತರು (1820-1890) 'ಪಂಚವಟಿ ರಾಮಾಯಣ - ವಾಲಿಸುಗ್ರೀವರೆ ಕಾಳಗೊ' (1917) ಎಂಬ ತುಳು ಯಕ್ಷಗಾನ ಪ್ರಸಂಗವನ್ನು 1887ರಲ್ಲಿ ಬರೆದರು. ಪಾತರ್ಿಸುಬ್ಬನ ಕನ್ನಡ 'ಪಂಚವಟಿ' ಪ್ರಸಂಗಕ್ಕೆ ಋಣಿಯಾಗಿರುವ ಈ ಕೃತಿಯಲ್ಲಿ ಸಂಕಯ್ಯ ಭಾಗವತರ ಪ್ರತಿಭೆಯ ಹೊಳಹುಗಳಿವೆ. ಬಡಕಬೈಲು ಪರಮೇಶ್ವರಯ್ಯನವರ (1881-1949) 'ಕಿಟ್ಣರಾಜಿ ಪರ್ಸಂಗೊ' (1929), ಹದಿನೇಳನೆಯ ಶತಮಾನದ ದೇವಿದಾಸ ಕವಿಯ ಕನ್ನಡ 'ಶ್ರೀಕೃಷ್ಣಸಂಧಾನ'ದ ಭಾಷಾಂತರ. ದೇರಂಬಳ ತ್ಯಾಂಪಣ್ಣ ಶೆಟ್ಟರ 'ಪಂಚವಟಿ' (1932). ಕೆಮ್ತೂರು ದೊಡ್ಡಣ್ಣ ಶೆಟ್ಟರ 'ಅಂಗದ ರಾಜಿ ಪರ್ಸಂಗೊ' (1954) - ಇವು ತುಳುವಿನ ಕೆಲವು ಹಳೆಯ ಪ್ರಸಂಗಗಳು. ಪಂದಿಬೆಟ್ಟು ವೆಂಕಟರಾಯರ 'ಕೋಟಿಚೆನ್ನಯ' (1939) ಎಂಬ ಕನ್ನಡ ಪ್ರಸಂಗ ತುಳು ಯಕ್ಷಗಾನದ ಜನಪ್ರಿಯತೆಗೆ ಕಾರಣವಾಯಿತು. ತುಳು ಮಹಾಕವಿ ಮಂದಾರ ಕೇಶವ ಭಟ್ಟರು ಪಾತರ್ಿಸುಬ್ಬನ 'ಪಾದುಕಾ ಪ್ರದಾನ' ಹಾಗೂ 'ಶೂರ್ಪನಖಾ ಪ್ರಕರಣ'ಗಳನ್ನು 'ಭರತನ ಮೋಕೆ ಬೊಕ್ಕ ಮಾಯೆದ ಶೂರ್ಪನಕಿ' ಎಂದು ಭಾಷಾಂತರಿಸಿದ್ದಾರೆ.

ಆಶಯ ಆಕೃತಿಗಳ ದೃಷ್ಟಿಯಿಂದ ತುಳು ಯಕ್ಷಗಾನ ಸಾಹಿತ್ಯಕ್ಕೆ ಘನತೆಯನ್ನು ತಂದವರು ಅಮೃತ ಸೋಮೇಶ್ವರರು. ಅಮೃತರ ಯಕ್ಷಗಾನ ಪ್ರಸಂಗದಲ್ಲಿ ಪುರಾಣದ ಪ್ರತೀಕ ಅಥವಾ ಜನಪದ ಕತೆಯ ಆಶಯದಷ್ಟೆ ಕವಿಯ ವೈಯಕ್ತಿಕ ಛಾಪು ಕೂಡ ಮುಖ್ಯವಾಗುತ್ತದೆ. 'ಅಮರ ಶಿಲ್ಪಿ ವೀರ ಕಲ್ಕುಡ' (1979), 'ಕಾಯಕಲ್ಪ' (1981), 'ಸಹಸ್ರ ಕವಚ ಮೋಕ್ಷ' (1982), 'ತರಿಪುರ ಮಥನ' (1984), 'ಮಹಾಕಾಲಿ ಮಗಧೇಂದ್ರ' (1985), 'ಮಹಾಶೂರ ಭೌಮಾಸುರ' (1987) - ಇವು ಅವರ ಕೆಲವು ಮುಖ್ಯ ಪ್ರಸಂಗಗಳು. ಅನಂತರಾಮ ಬಂಗಾಡಿ, ಪುರುಷೋತ್ತಮ ಪೂಂಜ, ಎ. ಎನ್. ಶೆಟ್ಟಿ, ನಿತ್ಯಾನಂದ ಕಾರಂತ - ಮತ್ತಿತರ ಹಲವು ಕವಿಗಳು ತುಳು ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.

ತುಳು ಯಕ್ಷಗಾನ, ಯಕ್ಷಗಾನ ವಸ್ತುವನ್ನು ಪುರಾಣಲೋಕದಿಂದ ಜಾನಪದ ಪೋಕಕ್ಕೆ ತಂದಿತು. ಇದರಿಂದ ತೆಂಕುತಿಟ್ಟಿನ ಈ ಯಕ್ಷಗಾನ ವೇಷಭೂಷಣದ ಮೇಲಾದ ದುಷ್ಪರಿಣಾಮಗಳ ಬಗ್ಗೆ ಯಕ್ಷಗಾನ ವಿಮರ್ಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತೆಂಕುತಿಟ್ಟಿನ ವೇಷಭೂಷಣ ಹಾಗೂ ತುಳು ಜಾನಪದ ರಂಗಭೂಮಿಯ ವೇಷಭೂಷಣಗಳ ಔಚಿತ್ಯಪೂರ್ಣ ಬೆಸುಗೆಯಿಂದ ತುಳುತಿಟ್ಟು ಎಂಬ ಪ್ರತ್ಯೇಕ ಕವಲನ್ನು ಬೆಳೆಸುವ ಪ್ರಯತ್ನ ಇನ್ನೂ ಆರಂಭದ ಹಂತದಲ್ಲಿದೆ.

No comments:

Post a Comment